Monday, January 21, 2019

                                                                       ನಡೆದಾಡುವ  ದೇವರು
   
   ವೀರಾಪುರದಲ್ಲಿ  ಜನಿಸಿದ  ಕನ್ನಡಾಂಬೆಯ ವೀರ  ಪುತ್ರ ,
   ತಮ್ಮ ಇಹಲೋಕದ  ಕಾಯಕವ  ಪೂರೈಸಿ  ದೇವರ  ಬಳಿಗೆ  ತೆರಳಿದ  ಶಿವನ  ಸುಪುತ್ರ ....
   ತ್ರಿವಿಧ  ದಾಸೋಹಿಯಾಗಿ  ಭಕ್ತರ  ಪಾಲಿಗೆ  ಪರಮಾತ್ಮನಾದ  ' ಕರ್ನಾಟಕ ರತ್ನ' ,
   ನೊಂದಿಹೆವು  ನಾವು  ಬಹಳ , ರತ್ನದಂತಹ  ನಿಮಗೆ  ತಲುಪಲಿಲ್ಲ  ' ಭಾರತ ರತ್ನ' .....

   ಸದಾಕಾಲ  ಇತರರ  ಬಾಳಿಗೆ  ಬೆಳಕಾಗಲೆಂದು  ಮೇಣದಂತೆ  ಉರಿದ  ತ್ಯಾಗಮಯಿ
   ಹಸಿದವರ  ಪಾಲಿಗೆ  ಅಮೃತವನ್ನಿತ್ತ  ಸಹೃದಯಿ
    ಜ್ಞಾನದ  ಹಸಿವನ್ನು  ನೀಗಿಸಿದ  ಮಹಾನ್  ಕರುಣಾಮಯಿ
   ನಿಮ್ಮನ್ನು  ಕಳೆದುಕೊಂಡ  ಈ  ನಾಡು , ಇಂದು  ನಿಜಕ್ಕೂ   ಬಡಪಾಯಿ......

   ಸಿದ್ಧಗಂಗಾ  ಕ್ಷೇತ್ರವನ್ನೇ  ಸ್ವರ್ಗದಂತೆ  ಮಾರ್ಪಡಿಸಿದ ಶಿವನ  ಕುಮಾರ...
   ಭಕ್ತರ  ಹೃದಯದಲ್ಲಿ   ಸದಾ  ಕಾಲ  ನೀವು  ಅಮರ.......
   ಸರ್ವರಿಗೂ  ಸನ್ಮಾರ್ಗ   ತೋರಿ  , ತುಂಬು  ಜೀವನ  ನಡೆಸಿದ  ಮಹಾನ್  ಚೇತನ ,
   ನಡೆದಾಡುವ  ದೇವರಾಗಿ  ನಡೆಸಿದಿರಿ  ನೀವು ,  ಸಾರ್ಥಕತೆಯ  ಜೀವನ .............


                                                                                 ಅನುಪಮ ಬಿ ಜಿ

#guru #teacher #sculptor #knowledge