ನಡೆದಾಡುವ ದೇವರು
ವೀರಾಪುರದಲ್ಲಿ ಜನಿಸಿದ ಕನ್ನಡಾಂಬೆಯ ವೀರ ಪುತ್ರ ,
ತಮ್ಮ ಇಹಲೋಕದ ಕಾಯಕವ ಪೂರೈಸಿ ದೇವರ ಬಳಿಗೆ ತೆರಳಿದ ಶಿವನ ಸುಪುತ್ರ ....
ತ್ರಿವಿಧ ದಾಸೋಹಿಯಾಗಿ ಭಕ್ತರ ಪಾಲಿಗೆ ಪರಮಾತ್ಮನಾದ ' ಕರ್ನಾಟಕ ರತ್ನ' ,
ನೊಂದಿಹೆವು ನಾವು ಬಹಳ , ರತ್ನದಂತಹ ನಿಮಗೆ ತಲುಪಲಿಲ್ಲ ' ಭಾರತ ರತ್ನ' .....
ಸದಾಕಾಲ ಇತರರ ಬಾಳಿಗೆ ಬೆಳಕಾಗಲೆಂದು ಮೇಣದಂತೆ ಉರಿದ ತ್ಯಾಗಮಯಿ
ಹಸಿದವರ ಪಾಲಿಗೆ ಅಮೃತವನ್ನಿತ್ತ ಸಹೃದಯಿ
ಜ್ಞಾನದ ಹಸಿವನ್ನು ನೀಗಿಸಿದ ಮಹಾನ್ ಕರುಣಾಮಯಿ
ನಿಮ್ಮನ್ನು ಕಳೆದುಕೊಂಡ ಈ ನಾಡು , ಇಂದು ನಿಜಕ್ಕೂ ಬಡಪಾಯಿ......
ಸಿದ್ಧಗಂಗಾ ಕ್ಷೇತ್ರವನ್ನೇ ಸ್ವರ್ಗದಂತೆ ಮಾರ್ಪಡಿಸಿದ ಶಿವನ ಕುಮಾರ...
ಭಕ್ತರ ಹೃದಯದಲ್ಲಿ ಸದಾ ಕಾಲ ನೀವು ಅಮರ.......
ಸರ್ವರಿಗೂ ಸನ್ಮಾರ್ಗ ತೋರಿ , ತುಂಬು ಜೀವನ ನಡೆಸಿದ ಮಹಾನ್ ಚೇತನ ,
ನಡೆದಾಡುವ ದೇವರಾಗಿ ನಡೆಸಿದಿರಿ ನೀವು , ಸಾರ್ಥಕತೆಯ ಜೀವನ .............
ಅನುಪಮ ಬಿ ಜಿ
ವೀರಾಪುರದಲ್ಲಿ ಜನಿಸಿದ ಕನ್ನಡಾಂಬೆಯ ವೀರ ಪುತ್ರ ,
ತಮ್ಮ ಇಹಲೋಕದ ಕಾಯಕವ ಪೂರೈಸಿ ದೇವರ ಬಳಿಗೆ ತೆರಳಿದ ಶಿವನ ಸುಪುತ್ರ ....
ತ್ರಿವಿಧ ದಾಸೋಹಿಯಾಗಿ ಭಕ್ತರ ಪಾಲಿಗೆ ಪರಮಾತ್ಮನಾದ ' ಕರ್ನಾಟಕ ರತ್ನ' ,
ನೊಂದಿಹೆವು ನಾವು ಬಹಳ , ರತ್ನದಂತಹ ನಿಮಗೆ ತಲುಪಲಿಲ್ಲ ' ಭಾರತ ರತ್ನ' .....
ಸದಾಕಾಲ ಇತರರ ಬಾಳಿಗೆ ಬೆಳಕಾಗಲೆಂದು ಮೇಣದಂತೆ ಉರಿದ ತ್ಯಾಗಮಯಿ
ಹಸಿದವರ ಪಾಲಿಗೆ ಅಮೃತವನ್ನಿತ್ತ ಸಹೃದಯಿ
ಜ್ಞಾನದ ಹಸಿವನ್ನು ನೀಗಿಸಿದ ಮಹಾನ್ ಕರುಣಾಮಯಿ
ನಿಮ್ಮನ್ನು ಕಳೆದುಕೊಂಡ ಈ ನಾಡು , ಇಂದು ನಿಜಕ್ಕೂ ಬಡಪಾಯಿ......
ಸಿದ್ಧಗಂಗಾ ಕ್ಷೇತ್ರವನ್ನೇ ಸ್ವರ್ಗದಂತೆ ಮಾರ್ಪಡಿಸಿದ ಶಿವನ ಕುಮಾರ...
ಭಕ್ತರ ಹೃದಯದಲ್ಲಿ ಸದಾ ಕಾಲ ನೀವು ಅಮರ.......
ಸರ್ವರಿಗೂ ಸನ್ಮಾರ್ಗ ತೋರಿ , ತುಂಬು ಜೀವನ ನಡೆಸಿದ ಮಹಾನ್ ಚೇತನ ,
ನಡೆದಾಡುವ ದೇವರಾಗಿ ನಡೆಸಿದಿರಿ ನೀವು , ಸಾರ್ಥಕತೆಯ ಜೀವನ .............
ಅನುಪಮ ಬಿ ಜಿ